ದಾವಣಗೆರೆ (ಭರಮಸಾಗರ): ದುರಾಸೆಯಿಂದ ಭ್ರಷ್ಟಾಚಾರ ಹೆಚ್ಚಾಗಿ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ವಿಷಾದ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಶನಿವಾರ ನಡೆಯುತ್ತಿರುವ ಸಿರಿಗೆರೆ ಮಠದ 5ನೇ ದಿನದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುರಾಸೆ ಇವತ್ತಿನ ಪರಿಸ್ಥಿತಿಗೆ ಕಾರಣ. ಹಿರಿಯರು ಕಟ್ಟಿದ ಮೌಲ್ಯಗಳು ಹಾಳಾಗುತ್ತಿವೆ. ದೇಶದ ಅಭಿವೃದ್ಧಿಗಿಂತ ದುರಾಸೆಯ ಅಭಿವೃದ್ಧಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
52 ಲಕ್ಷ ರೂ. ಜೀಪ್ ಹಗರಣ, 64 ಕೋಟಿ ರೂ. ಬೋಪರ್ಸ್ ಹಗರಣ, 70 ಸಾವಿರ ಕೋಟಿ ರೂ. ಕಾಮನ್ ವೆಲ್ತ್ ಗೇಮ್ಸ್ ಹಗರಣ, 1.76 ಲಕ್ಷ ಕೋಟಿ ರೂ. 2 ಜಿ ಹಗರಣಗಳಲ್ಲಿ ಎಷ್ಟೊಂದು ತೆರಿಗೆ ಹಣ ಸೋರಿಕೆ ಆಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದಂತೆ ಒಂದು ರೂಪಾಯಿಯಲ್ಲಿ 85 ಪೈಸೆ ಸೋರಿಕೆಯಾಗುತ್ತಿದೆ ಎಂಬ ಮಾತು ಅಂದಿನ ಇಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಇಂದಿನ ಶೈಕ್ಷಣಿಕ ಪಠ್ಯ ಬರಿ ಹಣ ಮಾಡುವುದನ್ನು ಕಲಿಸುತ್ತಿದೆ. ಮೊಬೈಲ್ ನಲ್ಲಿ ಮೌಲ್ಯಗಳು ಇರುವುದಿಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಇರಬೇಕಾದರೆ ಪ್ರಾಮಾಣಿಕತೆ ಮತ್ತು ತೃಪ್ತಿ ಆಳುವ ವರ್ಗದಲ್ಲಿ ಇರಬೇಕು ಎಂದರು.
ಸಿರಿಗರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.
More Stories
ಮಾತೃಭಾಷೆಕನ್ನಡವನ್ನು ಉಳಿಸಿ-ಬೆಳೆಸುವ ಜವಾಬ್ದಾರಿಎಲ್ಲರ ಮೇಲಿದೆ : ಶಾಸಕ ತಮ್ಮಯ್ಯ
ಕೊಂಡಜ್ಜಿ ಕೆರೆಯನ್ನು ಪ್ರವಾಸಿ ತಾಣವಾಗಿಸಲು ಕ್ರಮ ಬಾಲಕಿಯರ ಜಲಸಾಹಸ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಕವಿತೆಗಳಲ್ಲಿ ಹೊಸತನ ಮೂಡಬೇಕಿದೆ – ವಿಜಯ ಅಮೃತ್ ರಾಜ್*